ಆಗಸ್ಟ್ 08, 2026
ಉತ್ತರ ಕರ್ನಾಟಕದ ಹೆಮ್ಮೆಯ ಮಗಳು ಕರ್ನಲ್ ಸ್ಪೂರ್ತಿ ಕುಲಕರ್ಣಿಗೆ ಅಭಿನಂದನೆ: ಬಾರ್ಡರ್ ರೋಡ್ಸ್ ಆರ್ಗನೈಸೇಶನ್ನಲ್ಲಿ ಪ್ರಮುಖ ಜವಾಬ್ದಾರಿ
ಬೆಳಗಾವಿ/ನರಗುಂದ:
ಉತ್ತರ ಕರ್ನಾಟಕದ ಹಾಗೂ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹೊಂಬಳ ಗ್ರಾಮದ ಹೆಮ್ಮೆಯ ಮಗಳಾದ ಕರ್ನಲ್ ಸ್ಪೂರ್ತಿ ಕುಲಕರ್ಣಿ ಅವರು ಭಾರತೀಯ ಸೇನೆಯಲ್ಲಿ ಮಹತ್ವದ ಸಾಧನೆ ಮಾಡುವ ಮೂಲಕ ಇಡೀ ಕರುನಾಡು ಹೆಮ್ಮೆಪಡುವಂತೆ ಮಾಡಿದ್ದಾರೆ.
ಗಡಿ ರಸ್ತೆಗಳ ಸಂಘಟನೆಯ (BRO) 'ಚೇತಕ್' ಯೋಜನೆಯಡಿಯಲ್ಲಿ 45 ಕಾರ್ಯಪಡೆಯ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡ ಮೊದಲ ಮಹಿಳಾ ಆರ್ಮಿ ಆಫೀಸರ್ (ಆರ್ಮಿ ಅಧಿಕಾರಿ) ಎಂಬ ಹೆಗ್ಗಳಿಕೆಗೆ ಕರ್ನಲ್ ಸ್ಪೂರ್ತಿ ಕುಲಕರ್ಣಿ ಪಾತ್ರರಾಗಿದ್ದಾರೆ.
ಪರಿಶ್ರಮ, ನಿರಂತರ ಪ್ರಯತ್ನ ಮತ್ತು ಆತ್ಮವಿಶ್ವಾಸವಿದ್ದರೆ ಎಂತಹ ಕಠಿಣ ಸವಾಲು ಹಾಗೂ ಗುರಿಯನ್ನಾದರೂ ತಲುಪಬಹುದು ಎಂಬುದಕ್ಕೆ ಇವರ ಸಾಧನೆಯೇ ಪ್ರತ್ಯಕ್ಷ ಸಾಕ್ಷಿಯಾಗಿದೆ. ದೇಶಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡು ಉತ್ತರ ಕರ್ನಾಟಕಕ್ಕೆ ಕೀರ್ತಿ ತಂದಿರುವ ಕರ್ನಲ್ ಸ್ಪೂರ್ತಿ ಕುಲಕರ್ಣಿ ಅವರಿಗೆ 'ಕರುನಾಡ ಬಲ ನ್ಯೂಸ್' ಬಳಗ ಹಾಗೂ ಕನ್ನಡಿಗರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು. ಇವರ ಸಾಧನೆಯ ಹಾದಿ ಹೀಗೆಯೇ ಮುಂದುವರಿಯಲಿ ಎಂದು ಶುಭ ಹಾರೈಸುತ್ತೇವೆ.
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

